Monday, October 3, 2011

ಹೊರಟಿದೆ

ತಿಳಿಯದ ಮರೆವು ನೆನಪನ್ನು
ತಿಳಿಯಾಗಿ ಕದಡಿದೆ ...
ಸವಿ ಕ್ಷಣಗಳು
ತಳಕ್ಕೆ ಸೇರಿವೆ...
ಆಘಾತಗಳು
ತಳ ವೂರದೆ
ಕ್ರಮವಾಗಿ ತುಳುಕುತ್ತಿವೆ ...
ಸುತ್ತ ಅಸ್ಪಷ್ಟ ಅಂಬರದ ಗೋಡೆ !
ಬಲುವಾಗಿ ಹಿಡಿದಿಟ್ಟಿದೆ
ಹೊಸ ಹನಿಯ ಒಳ ಬಿಡದೆ ...
ಸತ್ತ ಕಂಬನಿಯೊಳಗೆ
ಸುಟ್ಟ ಮಾತು ನೂರಾರು ...
ಪಿಸುಗುಟ್ಟಿ ಹೇಳದ ಹೊರತು
ಆರಿ ಹೋಗಲಾರದು ಹಾಗೆಯೇ...
ಬೀಸಲು ಮರೆತ ಬಿರುಗಾಳಿ
ದಿಕ್ಕೆಡಿಸಿ ತಾನೇ ಮರೆತಿದೆ .
ತನ್ನ ತಾನರಿಯುವ ಮುನ್ನ ,
ಬದಲಾವಣೆಯ ಬತ್ತಳಿಕೆಯಲ್ಲಿ ಕೂತ
ಗುರಿಯೆಡೆಗೆ ಹೊರಟ ಬಾಣವಾಗಿದೆ
ಮನಸು ; ಚೂರೂ ಮೊನಚಿಲ್ಲದೆ...

No comments: